ಮುತ್ತು ಹವಳಗಳಿಂದ ಮೂಡಿಬಂದ ಮುದ್ದು ಗಣೇಶ
ಗಣೇಶನ ಕಲಾಕೃತಿಯನ್ನು ಅನಾವರಣಗೊಳಿಸಿದ ಕಲಾಪೋಷಕ ದಾಮೋದರ
(Manipala) ಮಣಿಪಾಲ: ಗ್ರಾಸ್ ಲ್ಯಾಂಡ್ಸ್ ಇವರ ಸಹಯೋಗದಲ್ಲಿ ಮಣಿಪಾಲದ ಹೃದಯ ಭಾಗದಲ್ಲಿರುವ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಅನಾವರಣಗೊಳಿಸಿದರು
ಗಣೇಶ ಹಬ್ಬದ ಸಂದರ್ಭದಲ್ಲಿ ಈ ಗಣೇಶನ ಕಲಾಕೃತಿಯ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ.
ಈ ಕಲಾಕೃತಿಯನ್ನು ರಚಿಸಲು ಕಲಾವಿದರು ಸುಮಾರು ನಾಲ್ಕರಿಂದ ಐದು ಕೆಜಿ ಹವಳ, ಮುತ್ತಿನ ಮಣಿಗಳನ್ನು ಬಳಸಿದ್ದಾರೆ. ಕಲಾಕೃತಿಯು ಸುಮಾರು ಐದು ಅಡಿ ಎತ್ತರವಿದೆ. ಕಲಾವಿದ ರವಿ ಹೀರಬೆಟ್ಟ ಅವರು ಈ ಕಲಾಕೃತಿಯನ್ನು ರಚಿಸಲು ಸಹಯೋಗ ನೀಡಿದ್ದಾರೆ.
ಚೌತಿಯ ಸಂದರ್ಭದಲ್ಲಿ ಈ ಕಲಾಕೃತಿಯು ಮೂರು ದಿನಗಳ ಕಾಲ ಪ್ರದರ್ಶನದಲ್ಲಿರುತ್ತದೆ.

