ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಕುತ್ಯಾರು ಗ್ರಾಮದ ಅಶಕ್ತ ಕುಟುಂಬಕ್ಕೆ ಮಾಶಾಸನ ವಿತರಣೆ
ಕುತ್ಯಾರಿನ ಲೀಲಾ ಕೋಟ್ಯಾನ್ ಮತ್ತು ಅವರ ಮಗಳು ಜ್ಯೋತಿಯವರಿಗೆ ಮಾಶಾಸನ ಕೊಡುಗೆ
(Kaup) ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಾಪು ತಾಲೂಕು ಕುತ್ಯಾರು ಗ್ರಾಮದ ಅಶಕ್ತ ತಾಯಿ ಮಗಳು ಲೀಲಾ ಕೋಟ್ಯಾನ್ ಮತ್ತು ಅವರ ಮಗಳಾದ ಜ್ಯೋತಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ನೀಡುತ್ತಿರುವ ಮಾಸಾಸನ ಮಂಜೂರು ಆಗಿದ್ದು, ವಿತರಣೆ ಮಾಡಲಾಯಿತು
ಇಬ್ಬರೇ ಮನೆಯಲ್ಲಿದ್ದು ಲೀಲಾರವರಿಗೆ ವಯಸ್ಸಾಗಿದ್ದು ಕಾಲುನೋವಿನಿಂದ ನಡೆಯಲು ಅಸಾಧ್ಯವಾಗಿತ್ತು. ಅವರ ಮಗಳು ಬುದ್ಧಿಮಾಂದ್ಯಳಾಗಿದ್ದು, ಅಂಗ ವೈಕಲ್ಯದಿಂದ ಬಳಲುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಶೆಟ್ಟಿಯವರ ಶಿಫಾರಸ್ಸಿನೊಂದಿಗೆ ಮಾಶಾಸನ ನೀಡಲಾಯಿತು.
ಈ ಸಂದರ್ಭ ಜನಜಾಗೃತಿ ವೇದಿಕೆಯ ಸದಸ್ಯೆ ಹಾಗೂ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿನುತಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸವಿತಾ, ಸೇವಾ ಪ್ರತಿನಿಧಿ ಶ್ರೀಮತಿ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

