ಮುದರಂಗಡಿ: ಬಸ್ಸು ನಿಲ್ದಾಣದ ಬಳಿ ಶುದ್ಧ ನೀರಿನ ಘಟಕದ ಉದ್ಘಾಟನೆ
ಘಟಕ ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ
(Mudarangadi) ಮುದರಂಗಡಿ: ಲಯನ್ಸ್ ಕ್ಲಬ್ ಮುದರಂಗಡಿ ಹಾಗೂ ಮುದರಂಗಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಮುದರಂಗಡಿಯ ಮೇಲಿನ ಪೇಟೆಯ ಬಸ್ಸು ನಿಲ್ದಾಣದ ಬಳಿ ಶುದ್ಧ ನೀರಿನ ಘಟಕದ ಉದ್ಘಾಟನೆಯನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಹರಿಣಾಕ್ಷ ಶೆಟ್ಟಿ ಪಿಲಾರು, ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಿಯಾಜ್ ನಜೀರ್ ಸಾಹೇಬ್, ಕಾರ್ಯದರ್ಶಿ ಶ್ರೀಮತಿ ಶೇರಿನ್ ಸ್ಟೆಲ್ಮಾ, ಕೋಶಾಧಿಕಾರಿ ಲಾರೆನ್ಸ್ ಡಿಸೋಜ, ಭೂ ನ್ಯಾಯ ಮಂಡಳಿಯ ಸದಸ್ಯ ರಮೀಜ್ ಹುಸೈನ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಮೈಕಲ್ ಡಿಸೋಜ ಉದ್ಯಮಿಗಳಾದ ಮುಬಾರಕ್ ಸಾಹೇಬ್, ಪ್ರವೀಣ್ ಶೆಟ್ಟಿ, ಆಜೀಪ್ ಸಾಹೇಬ್, ಅನುಷ್ ಆಚಾರ್ಯ, ಮುದರಂಗಡಿ ಮೇಲಿನ ಪೇಟೆಯ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಕಾರ್ಯದರ್ಶಿ ಅರುಣ್ ಮೆಂಡೋನ್ಸಾ ಹಾಗೂ ಸರ್ವಸದಸ್ಯರು, ಲಯನ್ಸ್ ಕ್ಲಬ್ ನ ಸದಸ್ಯ ವಿನ್ಸೆಂಟ್ ಡಿಸೋಜಾ, ಫೆಲಿಕ್ಸ್ ಡಿಸೋಜಾ, ಜೆ ಬಿ ಡಿಸೋಜಾ, ಲಿಯೋ ಕ್ಲಬ್ ಮುದರಂಗಡಿ ಅಧ್ಯಕ್ಷ ಕೈರಾ ಶೈನಾ, ಕಾರ್ಯದರ್ಶಿ ರಿಯಾ, ಕೋಶಾಧಿಕಾರಿ ಅಯ್ಶಾಲ್, ರಿಯಾನ್ ಕಾರ್ಡ, ಅಡ್ರೀನ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

