ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ರಥಾಲಯಕ್ಕೆ ಶಿಲಾನ್ಯಾಸ
ನೂತನ ರಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ ದೇವಳದ ಅರ್ಚಕರಾದ ಶ್ರೀಧರ್ ಭಟ್
(Udupi) ಉಡುಪಿ: ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ, ದೇವಳದ ಅರ್ಚಕರಾದ ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ನಡೆದ ನೂತನ ರಥಾಲಯ (ರಥದ ಕೊಟ್ಟಿಗೆ) ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮೊಕ್ತೇಸರ ಐತು ಎಂ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ರಥಾಲಯದ ದಾನಿ ಟಿ. ಶಂಬು ಶೆಟ್ಟಿ, ಭಕ್ತವೃಂದದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹಾಗೂ ಪ್ರಮುಖರಾದ ಅವಿರಾಜ್ ಶೆಟ್ಟಿ, ಬೆಳ್ಕಳೆ ಹರ್ಷ ಭಟ್, ಸುಂದರ ಶೆಟ್ಟಿ, ಶ್ರೀ ಅಜಿತ್ ಶೆಟ್ಟಿ, ಉಮೇಶ್ ಶೆಟ್ಟಿ, ಪ್ರಭಾಕರ ಅಂಚನ್, ಶ್ರೀಮತಿ ಅನುಷಾ ಆಚಾರ್ಯ, ಕೃಷ್ಣರಾಜ್ ಭಾದ್ಯ, ರಮೇಶ್ ಆಚಾರ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

