• Home  
  • ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು, ಬದಲಾವಣೆಯ ಅನಿವಾರ್ಯತೆ: ಎಡ್ವರ್ಡ್ ಲಾರ್ಸನ್ ಡಿಸೋಜ (The challenge of teachers in the digital age, the inevitability of change: Edward Larson D’Souza)
- ವಿಷೇಶ ಸುದ್ದಿ

ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು, ಬದಲಾವಣೆಯ ಅನಿವಾರ್ಯತೆ: ಎಡ್ವರ್ಡ್ ಲಾರ್ಸನ್ ಡಿಸೋಜ (The challenge of teachers in the digital age, the inevitability of change: Edward Larson D’Souza)

Share: ಡಿಜಿಟಲ್ ಯುಗದಲ್ಲಿ ಶಿಕ್ಷಕರ ಸವಾಲು, ಬದಲಾವಣೆಯ ಅನಿವಾರ್ಯತೆ: ಎಡ್ವರ್ಡ್ ಲಾರ್ಸನ್ ಡಿಸೋಜ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ ​(Nitte) ನಿಟ್ಟೆ: ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು ‘ಜೆನ್ ಝೆಡ್’ (Gen Z) ಹಾಗೂ ‘ಜೆನ್ ಆಲ್ಫಾ’ ಪೀಳಿಗೆಯ ಕಲಿಕಾ ಶೈಲಿಗೆ ತಕ್ಕಂತೆ ಶಿಕ್ಷಕರು ತಮ್ಮ ಪಾತ್ರವನ್ನು ಪುನರ್ ವ್ಯಾಖ್ಯಾನಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಡಾ. ಎನ್‌ ಎಸ್‌ ಎಮ್‌ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಡ್ವರ್ಡ್ ಲಾರ್ಸನ್ ಡಿಸೋಜ ಅಭಿಪ್ರಾಯ ಪಟ್ಟಿದ್ದಾರೆ. […]

​(Nitte) ನಿಟ್ಟೆ: ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು ‘ಜೆನ್ ಝೆಡ್’ (Gen Z) ಹಾಗೂ ‘ಜೆನ್ ಆಲ್ಫಾ’ ಪೀಳಿಗೆಯ ಕಲಿಕಾ ಶೈಲಿಗೆ ತಕ್ಕಂತೆ ಶಿಕ್ಷಕರು ತಮ್ಮ ಪಾತ್ರವನ್ನು ಪುನರ್ ವ್ಯಾಖ್ಯಾನಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಡಾ. ಎನ್‌ ಎಸ್‌ ಎಮ್‌ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಡ್ವರ್ಡ್ ಲಾರ್ಸನ್ ಡಿಸೋಜ ಅಭಿಪ್ರಾಯ ಪಟ್ಟಿದ್ದಾರೆ.

 ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ಮತ್ತು ಸ್ಮಾರ್ಟ್‌ಫೋನ್‌ಗಳು ಕ್ಷಣಾರ್ಧದಲ್ಲಿ ಮಾಹಿತಿಯನ್ನು ಒದಗಿಸುತ್ತವೆ. ಆದರೆ, ಮಾಹಿತಿಯನ್ನು ಡೌನ್‌ಲೋಡ್ ಮಾಡಬಹುದಾದರೂ ಜಾಣ್ಮೆ, ವಿವೇಕ ಮತ್ತು ಮಾನವೀಯ ಮೌಲ್ಯಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನ ನೀಡುವ ಮಾಹಿತಿ ನೈತಿಕವೇ, ವಿಶ್ವಾಸಾರ್ಹವೇ ಎಂಬುದನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶಿಕ್ಷಕರ ಪ್ರೇರಣೆ ಅತ್ಯಗತ್ಯ.

​  ಕೊಠಾರಿ ಆಯೋಗವು ಹೇಳಿದಂತೆ “ಭಾರತದ ಭವಿಷ್ಯವು ತರಗತಿಗಳಲ್ಲಿ ರೂಪುಗೊಳ್ಳುತ್ತಿದೆ” ಎಂಬ ಮಾತು ಇಂದಿಗೂ ಸತ್ಯ. ಆದರೆ ಇಂದಿನ ತರಗತಿಗಳ ಸ್ವರೂಪ ಬದಲಾಗಿದೆ. ಸಾಮಾಜಿಕ ಮಾಧ್ಯಮ, ರೀಲ್ಸ್ ಮತ್ತು ಡಿಜಿಟಲ್ ಜಗತ್ತಿನ ಆಕರ್ಷಣೆಯಲ್ಲಿರುವ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ವಿಧಾನದಿಂದ ಆಕರ್ಷಿಸುವುದು ಸವಾಲಿನ ಕೆಲಸ. AI ಅನ್ನು ಬೆದರಿಕೆಯಾಗಿ ನೋಡದೆ, ಅದನ್ನು ಜವಾಬ್ದಾರಿಯುತವಾಗಿ ಬಳಸುವ ಕಲೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ.

​  ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಾದ ಪ್ರಮುಖ ಕೌಶಲಗಳು, ಸಹಾನುಭೂತಿ ಮತ್ತು ಸಕ್ರಿಯವಾಗಿ ಆಲಿಸುವ ಗುಣ, ​ಡಿಜಿಟಲ್ ಜಗತ್ತಿನಲ್ಲಿ ಸರಿ-ತಪ್ಪುಗಳನ್ನು ಗುರುತಿಸುವ ವಿವೇಕ, ​ಸೃಜನಶೀಲತೆ ಮತ್ತು ನಾಯಕತ್ವದ ಗುಣಗಳು, ​ಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ​ಶಿಕ್ಷಕರ ಅನಿವಾರ್ಯವಾಗಿದೆ.

  ಆಲ್ವಿನ್ ಟಾಫ್ಲರ್ ಹೇಳಿದಂತೆ “21ನೇ ಶತಮಾನದ ಅನಕ್ಷರಸ್ಥರೆಂದರೆ ಕಲಿಯಲು ಮತ್ತು ಹೊಸದನ್ನು ಅಳವಡಿಸಿಕೊಳ್ಳಲು ಸಿದ್ಧರಿಲ್ಲದವರು.” ಆದ್ದರಿಂದ ಶಿಕ್ಷಕರು ‘ನನಗೆ ಎಲ್ಲವೂ ತಿಳಿದಿದೆ’ ಎಂಬ ಭಾವನೆಯಿಂದ ಹೊರಬಂದು ನಿರಂತರ ಕಲಿಯುವವರಾಗಬೇಕು.

​  ಅದೇ ಸಮಯದಲ್ಲಿ, ಇಂದಿನ ಶಿಕ್ಷಕರು ಆಡಳಿತಾತ್ಮಕ ಕೆಲಸಗಳು, ಪರೀಕ್ಷೆಗಳು, ಇಲಾಖೆಯ ಜವಾಬ್ದಾರಿಗಳು ಮತ್ತು ವೈಯಕ್ತಿಕ ಜೀವನದ ನಡುವೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಮಾಜವು ಶಿಕ್ಷಕರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವ ಜೊತೆಗೆ ಅವರ ಮಾನಸಿಕ ನೆಮ್ಮದಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಾಗಿದೆ.

 ಶಿಕ್ಷಕರ ದಿನವು ಕೇವಲ ಹೂಗುಚ್ಛ, ಅಭಿನಂದನೆಗೆ ಸೀಮಿತವಾಗದೆ, “ನಾವು ಯಾವ ರೀತಿಯ ಶಿಕ್ಷಕರಾಗಬೇಕು?” ಎಂಬ ಆತ್ಮಾವಲೋಕನಕ್ಕೆ ದಾರಿಯಾಗಬೇಕು.

  ತಂತ್ರಜ್ಞಾನವು ಮಾಹಿತಿಯನ್ನು ನೀಡಬಹುದು, ಆದರೆ ಶಿಕ್ಷಕರ ಪ್ರೀತಿ, ಕಾಳಜಿ ಮತ್ತು ಮಾನವೀಯ ಸ್ಪರ್ಶ ಮಾತ್ರ ವಿದ್ಯಾರ್ಥಿಯ ಸುಂದರ ಭವಿಷ್ಯವನ್ನು ರೂಪಿಸಬಲ್ಲದು.

Leave a comment

Your email address will not be published. Required fields are marked *

eMedia Kannada  @2025. All Rights Reserved.