• Home  
  •  ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ, ಬೆಳಪು (Customer service is the goal of the cooperative: Dr. Deviprasad Shetty, Belapu)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಹಾಯ ಹಸ್ತ

 ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ, ಬೆಳಪು (Customer service is the goal of the cooperative: Dr. Deviprasad Shetty, Belapu)

Share: ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ, ಬೆಳಪು. ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆ (Belapu) ಬೆಳಪು :  ಬೆಳಪು ವ್ಯವಸಾಯ ಸಹಕಾರಿ ಸಂಘವು  2025-26 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಪಥದಲ್ಲಿದ್ದು, ಈ ಮೊದಲಿಗಿಂತ  ಮೂರು ಪಟ್ಟು ಹೆಚ್ಚಿನ ಪ್ರಗತಿಯನ್ನು ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ  ಡಾ| ದೇವಿಪ್ರಸಾದ್‌ ಶೆಟ್ಟಿ, ಬೆಳಪು ಹೇಳಿದ್ದಾರೆ.  ಅವರು ಶನಿವಾರ  ಉಚ್ಚಿಲ ಶಾಖೆಯ ವಿವಿಧೋದ್ದೇಶ ಸಹಕಾರಿ […]

(Belapu) ಬೆಳಪು :  ಬೆಳಪು ವ್ಯವಸಾಯ ಸಹಕಾರಿ ಸಂಘವು  2025-26 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಪಥದಲ್ಲಿದ್ದು, ಈ ಮೊದಲಿಗಿಂತ  ಮೂರು ಪಟ್ಟು ಹೆಚ್ಚಿನ ಪ್ರಗತಿಯನ್ನು ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ  ಡಾ| ದೇವಿಪ್ರಸಾದ್‌ ಶೆಟ್ಟಿ, ಬೆಳಪು ಹೇಳಿದ್ದಾರೆ.

 ಅವರು ಶನಿವಾರ  ಉಚ್ಚಿಲ ಶಾಖೆಯ ವಿವಿಧೋದ್ದೇಶ ಸಹಕಾರಿ ಮಹಲ್‌ ನಲ್ಲಿ ನಡೆದ ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಪ್ರಸಕ್ತ ವರ್ಷ 8.55 ಕೋಟಿ ಸಾರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ಲಾಭ ರೂ. 2,24,78,306 ಆಗಿರುತ್ತದೆ. ಸದಸ್ಯರಿಗೆ ಶೇ.14 ಡಿವಿಡೆಂಡ್‌ ನೀಡಲಾಗುವುದು. ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ ಎಂದರು.

  ಮಹಾಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಾದ ಸಂತೋಷ್‌ ಜೆ. ಶೆಟ್ಟಿ ಬರ್ಪಾಣಿ, ಶಕುಂತಳಾ ಶೆಟ್ಟಿ ಕುಂಜೂರು, ವಾಸುದೇವ ಆಚಾರ್ಯ, ಜಲಾಲುದ್ದೀನ್‌, ಕುಂಜ ಶ್ರೀಧರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

  ಶೈಕ್ಷಣಿಕ ಸಾಧಕರುಗಳನ್ನು ಗುರುತಿಸಿ ಅಭಿನಂದಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆನಾರೋಗ್ಯದಿಂದಿರುವವರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

  ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ದ್ಯುಮಣಿ ಆರ್‌ ಭಟ್‌ ಉಚ್ಚಿಲ, ನಿರ್ದೇಶಕರುಗಳಾದ ಪಾಂಡು ಶೆಟ್ಟಿಎಲ್ಲೂರು, ಆಲಿಯಬ್ಬ ಉಚ್ಚಿಲ, ಸೈಮನ್‌ ಡಿಸೋಜ ಮಾಣಿಯೂರು, ಪಾಂಡು ಶೇರಿಗಾರ ಪಣಿಯೂರು, ಗೋಪಾಲ ಪೂಜಾರಿ ಬೆಳಪು, ಸಾಧು ಶೆಟ್ಟಿ ಕುಂಜೂರು, ಅನಿತಾ ಆನಂದ, ಮೀನ ಪೂಜಾರ್ತಿ, ವಿಮಲ ಅಂಚನ್‌, ಸುಂದರಿ ಕುಲಾಲ್‌ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಗೋಪಾಲ್‌ ಬಲ್ಲಾಳ್‌ ಕೆ. ಇದ್ದರು.

  ಸತೀಶ್‌ ಶೆಟ್ಟಿಗುಡ್ಡೆಚ್ಚಿ ಸ್ವಾಗತಿಸಿ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ ಆಯ – ವ್ಯಯ, ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ  ಸುಜಾತ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.