• Home  
  • ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ  ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ (Demand for relaxation of the condition of fixing the limit of zero interest rate loans provided by NABARD to farmers)
- ಸಂಘ, ಸಂಸ್ಥೆಗಳು

ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ  ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ (Demand for relaxation of the condition of fixing the limit of zero interest rate loans provided by NABARD to farmers)

Share: ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ  ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ತಂಡದಿಂದ ಮನವಿ   (Shirva) ಶಿರ್ವ: ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳನ್ನು ಮರು ಪರಿಶೀಲಿಸುವಂತೆ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದ ನಿಯೋಗ SCDCC ಬ್ಯಾಂಕ್ ನ […]

(Shirva) ಶಿರ್ವ: ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳನ್ನು ಮರು ಪರಿಶೀಲಿಸುವಂತೆ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದ ನಿಯೋಗ SCDCC ಬ್ಯಾಂಕ್ ನ ಗೌರವಾನ್ವಿತ ಅಧ್ಯಕ್ಷರಾದ ಡಾ. ಎನ್.ಎಂ.ರಾಜೇಂದ್ರಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

   MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳ ಅನ್ವಯ ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತದೃಷ್ಟಿಯಿಂದ ಈ ಹಿಂದಿನಂತೆಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆಎನ್.ಎಂ. ರಾಜೇಂದ್ರಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಲಾಯಿತು.

  ನಿಯೋಗದಲ್ಲಿ ಸಂಘದ ನಿರ್ದೇಶಕರಾದ ಹರಿಣಾಕ್ಷ ಶೆಟ್ಟಿ ಪಿಲಾರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.