ಪಡುಬಿದ್ರಿ ಪ್ರಾ. ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಶ್ರೀಮತಿ ಚಾಂದಿನಿಯವರಿಗೆ ಬೀಳ್ಕೊಡುಗೆ
ಕಂಚಿನಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ
(Padubidri) ಪಡುಬಿದ್ರಿ: ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಶ್ರೀಮತಿ ಚಾಂದಿನಿ ಸಿಸ್ಟರ್ ರವರು ಕಂಚಿನಡ್ಕ ವ್ಯಾಪ್ತಿಯ ಜನರಿಗೆ 12 ವರ್ಷ ಸುದೀರ್ಘ ಆರೋಗ್ಯ ಸೇವೆ ನೀಡಿ ಇದೀಗ ಕುಂದಾಪುರದ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿದ್ದು, ಅವರನ್ನು ಕಂಚಿನಡ್ಕ ಅಂಗನವಾಡಿ ಕೇಂದ್ರದಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಪಂ ಮಾಜಿ ಸದಸ್ಯ ಅಬ್ದುಲ್ ಅಜೀಜ್, ಫಿರೋಜ್, ಕಲಂದರ್ ಶಾಫಿ, ಶ್ರೀಮತಿ ಜ್ಯೋತಿ ಮೆನನ್, ಅಬ್ದುಲ್ ರಜಾಕ್, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರಮೀಳಾ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ವೇದ ವಂದಿಸಿದರು.

