ಕೃತಕ ಬುದ್ಧಿಮತ್ತೆ, ಸಾಮಾಜಿಕ ಅರಿವು, ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರ
ಎಸ್ ಎಂವಿಐಟಿಎಂ ಮುಖ್ಯಗ್ರಂಥಪಾಲಕ ದೀಪಕ್ಎಸ್ ಅವರ ವಿಶೇಷ ಲೇಖನ
(UdupI) ಉಡುಪಿ: ಇಂದಿನ ಜಗತ್ತುಕೃತಕ ಬುದ್ಧಿಮತ್ತೆ ಯುಗಕ್ಕೆಕಾಲಿಟ್ಟಿದೆ. ಶಿಕ್ಷಣ, ಆರೋಗ್ಯ, ಕೃಷಿ, ಬ್ಯಾಂಕಿಂಗ್, ಕೈಗಾರಿಕೆ, ಮಾಧ್ಯಮ, ಸರ್ಕಾರಿ ಸೇವೆಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ.
ಮಾಹಿತಿಯನ್ನುಕ್ಷಣಾರ್ಧದಲ್ಲಿಒದಗಿಸುವುದು, ಭಾಷಾಂತರ ಮಾಡುವುದು, ಸಂಶೋಧನೆಗೆ ನೆರವಾಗುವುದು ಬರವಣಿಗೆಗೆ ಸಹಾಯ ಮಾಡುವುದು ಹಾಗೂ ನಿರ್ಧಾರ ತೆಗೆದು ಕೊಳ್ಳಲು ನೆರವಾಗುವುದು ಸೇರಿದಂತೆ ಅನೇಕ ಕಾರ್ಯಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದರೆ ಇದರ ಸಮರ್ಪಕ ಹಾಗೂ ಜವಾಬ್ದಾರಿಯುತ ಬಳಕೆಯ ಕುರಿತು ಸಮಾಜದಲ್ಲಿಅರಿವು ಮೂಡಿಸುವುದು ಅತ್ಯಗತ್ಯ.
ಕೃತಕ ಬುದ್ಧಿಮತ್ತೆಎಂದರೇನು?
ಕೃತಕ ಬುದ್ಧಿಮತ್ತೆ ಎಂದರೆ ಮಾನವನ ಬುದ್ಧಿವಂತಿಕೆಯನ್ನುಅನುಕರಿಸುವ ತಂತ್ರಜ್ಞಾನ, ಕಲಿಯುವುದು, ವಿಶ್ಲೇಷಿಸುವುದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಚಿತ್ರಗಳನ್ನು ಗುರುತಿಸುವುದು ಮುಂತಾದ ಕಾರ್ಯಗಳನ್ನು ಕಂಪ್ಯೂಟರ್ ವ್ಯವಸ್ಥೆಗಳು ನಿರ್ವಹಿಸುವ ಸಾಮರ್ಥ್ಯವೇ ಕೃತಕ ಬುದ್ಧಿಮತ್ತೆ.
ಕೃತಕ ಬುದ್ಧಿಮತ್ತೆಕುರಿತು ಸಮಾಜದಲ್ಲಿಅರಿವು ಏಕೆ ಅಗತ್ಯ?
ಕೃತಕ ಬುದ್ಧಿಮತ್ತೆಯು ವೇಗವಾಗಿ ಜನರ ಜೀವನದ ಭಾಗವಾಗುತ್ತಿರುವ ಸಂದರ್ಭದಲ್ಲಿಅದರ ಪ್ರಯೋಜನಗಳ ಜೊತೆಗೆ ಮಿತಿಗಳು ಮತ್ತು ಅಪಾಯಗಳ ಬಗ್ಗೆಯೂ ಪ್ರತಿಯೊಬ್ಬ ನಾಗರೀಕನಿಗೂ ತಿಳಿದಿರಬೇಕು. ಸರಿಯಾದ ಅರಿವಿಲ್ಲದೆ ಕೃತಕ ಬುದ್ಧಿಮತ್ತೆ ಬಳಸುವುದರಿಂದ ತಪ್ಪು ಮಾಹಿತಿ, ಆರ್ಥಿಕ ನಷ್ಟ, ಸೈಬರ್ ವಂಚನೆ ಮತ್ತುಗೌಪ್ಯತೆ ಉಲ್ಲಂಘನೆಯಂತಹಾ ಸಮಸ್ಯೆಗಳು ಉಂಟಾಗಬಹುದು. ಆದುದರಿಂದ ಕೃತಕ ಬುದ್ಧಿಮತ್ತೆಯ ಬಗ್ಗೆ ಸಾಕ್ಷರತೆ ಇಂದಿನ ಕಾಲದ ಅಗತ್ಯ ಕೌಶಲ್ಯವಾಗಿದೆ.
ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ. ಅವು ಜ್ಞಾನ ಮತ್ತು ಮಾಹಿತಿಯ ಕೇಂದ್ರವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಸಾರ್ವಜನಿಕರಲ್ಲಿಅರಿವು ಮೂಡಿಸುವ ಪ್ರಮುಖ ವೇದಿಕೆಯಾಗಬಹುದು.
ಇದಕ್ಕಾಗಿ ಗ್ರಂಥಾಲಯಗಳು ಕೈಗೊಳ್ಳಬಹುದಾದ ಪ್ರಮುಖ ಕಾರ್ಯಗಳು:
- ಕೃತಕ ಬುದ್ಧಿಮತ್ತೆ ಕುರಿತುಉಚಿತಅರಿವು ಕಾರ್ಯಗಳು ಹಾಗೂ ಕಾರ್ಯಾಗಾರಗಳನ್ನುಆಯೋಜಿಸುವುದು.
- ವಿದ್ಯಾರ್ಥಿಗಳು , ಶಿಕ್ಷಕರು, ರೈತರು, ಮಹಿಳೆಯರು ಮತ್ತು ಹಿರಿಯ ನಾಗರೀಕರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ನೀಡುವುದು.
- ಕೃತಕ ಬುದ್ಧಿಮತ್ತೆ ಬಳಕೆಯ ನೈತಿಕತೆ, ಗೌಪ್ಯತೆ ಹಾಗೂ ಸುರಕ್ಷತೆಯ ಕುರಿತು ಮಾರ್ಗದರ್ಶನ ನೀಡುವುದು.
- ವಿಶ್ವಾಸಾರ್ಹ ಡಿಜಿಟಲ್ ಮಾಹಿತಿ ಮೂಲಗಳನ್ನು ಪರಿಚಯಿಸುವುದು.
- ಕೃತಕ ಬುದ್ಧಿಮತ್ತೆ ಆಧಾರಿತ ಗ್ರಂಥಾಲಯ ಸೇವೆಗಳ ಮೂಲಕ ಮಾಹಿತಿ ಹುಡುಕುವ ಸಾಮರ್ಥ್ಯವನ್ನು ಹೆಚ್ಚಿಸುವುದು.
ಕೃತಕ ಬುದ್ಧಿಮತ್ತೆ ಪ್ರಮುಖ ಪ್ರಯೋಜನೆಗಳು
- ಶಿಕ್ಷಣದಲ್ಲಿ ವೈಯಕ್ತಿಕ ಕಲಿಕೆ ಹಾಗೂ ತ್ವರಿತ ಮಾಹಿತಿ ಲಭ್ಯವಾಗುತ್ತದೆ.
- ಆರೋಗ್ಯ ಕ್ಷೇತ್ರದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ನೆರವಾಗುತ್ತದೆ.
- ಕೃಷಿಯಲ್ಲಿ ಹವಾಮಾನ , ಮಣ್ಣಿನ ಸ್ಥಿತಿ ಹಾಗೂ ಬೆಳೆ ನಿರ್ವಹಣೆಯ ಮಾಹಿತಿ ಒದಗಿಸುತ್ತದೆ.
- ಸರಕಾರಿ ಸೇವೆಗಳನ್ನು ವೇಗವಾಗಿ ಹಾಗೂ ಸುಲಭವಾಗಿ ಪಡೆಯಲು ಸಹಾಯಕವಾಗಿದೆ.
- ಸಣ್ಣ ಉದ್ಯಮಗಳಿಗೆ ಮಾರುಕಟ್ಟೆ ವಿಶ್ಲೇಷಣೆ, ಜಾಹಿರಾತು ಹಾಗೂ ಗ್ರಾಹಕ ಸೇವೆಯಲ್ಲಿ ನೆರವಾಗುತ್ತದೆ.
- ಭಾಷಾಂತರದ ಮೂಲಕ ಭಾಷಾ ಅಡೆತಡಗಳನ್ನು ನಿವಾರಿಸುತ್ತದೆ.
- ಅಂಗವಿಕಲರಿಗೆ ಸಹಾಯಕ ತಂತ್ರಜ್ಞಾನಗಳನ್ನು ಒದಗಿಸಿ ಜೀವನ ಮಟ್ಟವನ್ನು ಸುಧಾರಿಸುತ್ತದೆ.
ಕೃತಕ ಬುದ್ಧಿಮತ್ತೆಯ ದುಷ್ಪರಿಣಾಮಗಳು ಮತ್ತು ಸವಾಲುಗಳು
ಕೃತಕ ಬುದ್ಧಿಮತ್ತೆಯ ಅನೇಕ ಪ್ರಯೋಜನಗಳ ಜೊತೆಗೆ ಕೆಲವು ಗಂಭೀರ ಸವಾಲುಗಳು ಇವೆ.
- ಸುಳ್ಳು ಮಾಹಿತಿ ಮತ್ತು ಡೀಪ್ಫೇಕ್ ಚಿತ್ರಗಳು ಹಾಗೂ ವೀಡಿಯೋಗಳ ಹರಡುವಿಕೆ.
- ಸೈಬರ್ ವಂಚನೆ ಮತ್ತು ಆನ್ ಲೈನ್ ಮೋಸಗಳು.
- ವೈಯಕ್ತಿಕ ಮಾಹಿತಿಯ ದುರುಪಯೋಗ ಮತ್ತು ಗೌಪ್ಯತೆ ಉಲ್ಲಂಘನೆ.
- ಕೃತಿಸ್ವಾಮ್ಯ ಉಲ್ಲಂಘನೆ ಹಾಗೂ ಶೈಕ್ಷಣಿಕ ಅಪ್ರಾಮಾಣಿಕತೆ.
- ಉದ್ಯೋಗಕ್ಷೇತ್ರದಲ್ಲಿ ಕೆಲವು ಸಾಂಪ್ರದಾಯಿಕ ಉದ್ಯೋಗಗಳ ಮೇಲೆ ಪರಿಣಾಮ.
- ಕೃತಕ ಬುದ್ಧಿಮತ್ತೆಯ ಮೇಲಿನ ಅತಿಯಾದ ಅವಲಂಬನೆಯಿಂದ ಮಾನವೀಯ ಚಿಂತನೆ ಮತ್ತು ಸೃಜನಶೀಲತೆಯ ಕುಗ್ಗುವಿಕೆ.
ಸಾರ್ವಜನಿಕರುಅನುಸರಿಸಬೇಕಾದ ಮುನ್ನೆಚ್ಚರಿಕೆಗಳು.
ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತವಾಗಿ ಬಳಸಲು ಪ್ರತಿಯೊಬ್ಬರೂ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.
- ಕೃತಕ ಬುದ್ಧಿಮತ್ತೆಯ ನೀಡುವ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳೊಂದಿಗೆ ಪರಿಶೀಲಿಸಬೇಕು.
- ವೈಯಕ್ತಿಕ ಬ್ಯಾಂಕಿಂಗ್ ಹಾಗೂ ಗೌಪ್ಯ ಮಾಹಿತಿಯನ್ನು ಕೃತಕ ಬುದ್ಧಿಮತ್ತೆಯ ಸಾಧನಗಳಲ್ಲಿ ಹಂಚಿಕೊಳ್ಳಬಾರದು.
- ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನುಕಲಿಕೆಯ ಸಹಾಯಕ ಸಾಧನವಾಗಿ ಮಾತ್ರ ಬಳಸಬೇಕು.
- ಮಕ್ಕಳ ಕೃತಕ ಬುದ್ಧಿಮತ್ತೆಯ ಬಳಕೆಗೆ ಪೋಷಕರು ಮಾರ್ಗದರ್ಶನ ನೀಡಬೇಕು
- ಡಿಜಿಟಲ್ ನೈತಿಕತೆ ಮತ್ತು ಸೈಬರ್ ಸುರಕ್ಷತೆ ಕುರಿತು ನಿರಂತರವಾಗಿ ತಿಳಿದುಕೊಳ್ಳಬೇಕು.
ಭವಿಷ್ಯದ ಗ್ರಂಥಾಲಯಗಳು ಡಿಜಿಟಲ್ಜ್ಞಾನ ಕೇಂದ್ರಗಳು
ಭವಿಷ್ಯದ ಗ್ರಂಥಾಲಯಗಳು ಪುಸ್ತಕಗಳ ಜೊತೆಗೆ ಡಿಜಿಟಲ್ ಮಾಹಿತಿ, ಎಐ ಸಾಕ್ಷರತೆ, ಸಂಶೋಧನಾ ಸಹಾಯ, ಡಿಜಿಟಲ್ ಕೌಶಲ್ಯ ತರಬೇತಿ ಹಾಗೂ ಜೀವನ ಪರ್ಯಂತ ಕಲಿಕೆಗೆ ಮಾರ್ಗದರ್ಶನ ನೀಡುವ ಸಮುದಾಯ ಜ್ಞಾನ ಕೇಂದ್ರಗಳಾಗಿ ರೂಪುಗೊಳ್ಳಲಿವೆ. ಸಮಾಜವನ್ನು ತಂತ್ರಜ್ಞಾನಕ್ಕೆ ಸಿದ್ಧಗೊಳಿಸುವಲ್ಲಿ ಗ್ರಂಥಾಲಯಗಳ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ
ಸಮಾರೋಪ
ಕೃತಕ ಬುದ್ಧಿಮತ್ತೆ ಮಾನವನ ಅಭಿವೃದ್ಧಿಗೆ ಶಕ್ತಿಯುತ ಸಾಧನವಾಗಿದೆ. ಆದರೆ ಅದರ ಯಶಸ್ಸು ತಂತ್ರಜ್ಞಾನದಲ್ಲಲ್ಲ. ಅದನ್ನು ಬಳಸುವ ನಮ್ಮ ಜವಾಬ್ದಾರಿಯಲ್ಲಿ ಅಡಗಿದೆ. ಸಾರ್ವಜನಿಕರಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ಅರಿವು ಡಿಜಿಟಲ್ ಸಾಕ್ಷರತೆ ಮತ್ತು ನೈತಿಕ ಬಳಕೆಯ ಮನೋಭಾವ ಬೆಳೆಸುವಲ್ಲಿ ಗ್ರಂಥಾಲಯಗಳು, ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಸುರಕ್ಷಿತ, ಪ್ರಗತಿಪರ ಮತ್ತು ಜ್ಞಾನ ಸಮೃದ್ಧ ಸಮಾಜ ನಿರ್ಮಾಣಕ್ಕೆ ದಾರಿದೀಪ ಆಗಬೇಕು.
“ಗ್ರಂಥಾಲಯಗಳು ಕೇವಲ ಪುಸ್ತಕಗಳ ಭಂಡಾರ ಮಾತ್ರವಲ್ಲ- ಡಿಜಿಟಲ್ಯುಗದಲ್ಲಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಅರಿವು ಮೂಡಿಸುವ ಸಮಾಜದ ಶಕ್ತಿಕೇಂದ್ರಗಳಾಗಿದೆ”.
ಲೇಖಕರು : ದೀಪಕ್ಎಸ್. ಮುಖ್ಯಗ್ರಂಥಪಾಲಕರು, ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್.

