• Home  
  • ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ (Unveiling of the service certificate for the renovation of Sri Banathirtha Sri Umamaheshwara Sannidhi)
- Uncategorised - ಧಾರ್ಮಿಕ

ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ (Unveiling of the service certificate for the renovation of Sri Banathirtha Sri Umamaheshwara Sannidhi)

Share: ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಸೇವಾಪತ್ರ ಅನಾವರಣಗೊಳಿಸಿದ ಅದಮಾರು ಕಿರಿಯ  ಶ್ರೀ ಈಶಪ್ರಿಯತೀರ್ಥ ಶ್ರೀಪಾದರು (Kunjarugiri) ಕುಂಜಾರುಗಿರಿ: ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾನುವಾರ  ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಗೊಳಿಸಿದರು.   ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರದಂದು ನಡೆಯಲಿರುವ  ಸುತ್ತಮುತ್ತಲಿನ  ಪರಿಸರ ಶುಚಿತ್ವ ಕಾರ್ಯಕ್ರಮಕ್ಕೆ  ಶ್ರೀಪಾದರು ಚಾಲನೆ ನೀಡಿ, ಮನೋ ನಿಯಮಕರಾದ ರುದ್ರ ದೇವರ […]

(Kunjarugiri) ಕುಂಜಾರುಗಿರಿ: ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾನುವಾರ  ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಗೊಳಿಸಿದರು.

  ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರದಂದು ನಡೆಯಲಿರುವ  ಸುತ್ತಮುತ್ತಲಿನ  ಪರಿಸರ ಶುಚಿತ್ವ ಕಾರ್ಯಕ್ರಮಕ್ಕೆ  ಶ್ರೀಪಾದರು ಚಾಲನೆ ನೀಡಿ, ಮನೋ ನಿಯಮಕರಾದ ರುದ್ರ ದೇವರ ಸೇವೆ ಮಾಡುವುದರೊಂದಿಗೆ ಪರಿಸರ ಶುಚಿತ್ವದೊಂದಿಗೆ ಪರಿಸರ ರಕ್ಷಣೆ ಮಾಡಬೇಕು. ನಾವು ಇರುವ  ಪರಿಸರ ಶುದ್ಧಿಯಾಗಿದ್ದರೆ ಮಾತ್ರ  ನಮ್ಮ ಮನಸ್ಸು ಶುದ್ಧಿಯಿಂದ ಇರುತ್ತದೆ. ಇದರಿಂದ  ದೇವಾ ಸೇವೆ ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಸಂದೇಶ ನೀಡಿದರು.

    ಈ ಸಂದರ್ಭದಲ್ಲಿ  ಶ್ರೀ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕರಾದ ಗೋವಿಂದರಾಜ್, ಶ್ರೀ ಮಠದ ಅಧಿಕಾರಿಗಳಾದ ನಾಗರಾಜ್ ರಾವ್ ಮತ್ತು ನಾಗರಾಜ ತಂತ್ರಿ, ಅರ್ಚಕರಾದ ಗೋಪಾಲಕೃಷ್ಣ ಭಟ್ , ಇಂಜಿನಿಯರ್  ಲಕ್ಷ್ಮೀನಾರಾಯಣ ಉಪಾಧ್ಯಾಯ, ಕುರ್ಕಾಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ, ಪರಶುರಾಮ ಭಜನಾ ಮಂಡಳಿಯ ಅಧ್ಯಕ್ಷ ಕುಳೇದು ಪ್ರಶಾಂತ ಶೆಟ್ಟಿ, ಪಾಜೈ ಫ್ರೆಂಡ್ಸ್  ಅಧ್ಯಕ್ಷ ಸಂತೋಷ್ ಆಚಾರ್ಯ,  ಸುಮಾ ಶೆಟ್ಟಿ,  ವಿಶ್ವ ಹಿಂದೂ ಪರಿಷತ್ತ್‌ ಮುಖಂಡ ರಾಕೇಶ್ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್, ವಿಶ್ವನಾಥ ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.