ಮಲ್ಲಾರು ಯುವಕ ಮಂಡಲದ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ
ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ ಆಯ್ಕೆ ಗೊಂಡರು
(Kaup) ಕಾಪು : ಮಲ್ಲಾರು ಯುವಕ ಮಂಡಲ (ರಿ ) ಮಲ್ಲಾರು ಇದರ 2026 ರಿಂದ 2028 ಸಾಲಿಗೆ ಅನ್ವರ್ ಅಲಿ ಕಾಪುರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ , ಉಪಾಧ್ಯಕ್ಷರಾಗಿ ಉಮೇಶ್ ಕರ್ಕೇರ, ಕಾರ್ಯದರ್ಶಿ ಸತೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಹಮ್ಮದ್ ಅಲಿ ಮನಿಯಾರಿ, ಸಂಘಟನಾ ಕಾರ್ಯದರ್ಶಿ ರಾಜೇಶ್ ಭಂಡಾರಿ, ಕ್ರೀಡಾ ಕಾರ್ಯದರ್ಶಿ ಸನಾವರ್ ಶೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಅಣ್ಣಪ್ಪ ರವರು ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಇಮ್ರಾನ್ ಹುಸೈನ್ ಬ್ಯಾರಿ, ನಾರಾಯಣ, ಅಬ್ದುಲ್ ಸತ್ತಾರ್ ಚಾಂದ್, ಜಮಾಲ್ , ಸುಜಿತ್ ಶೆಟ್ಟಿಗಾರ್, ಸುಮೀರ್, ಗುರು ಮೂರ್ತಿ, ಮೊಯಿದಿನ್, ಮುಬಾರಕ್ ಆಯ್ಕೆಗೊಂಡರು.
ಯುವಕ ಮಂಡಲದ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಕಟ್ಟಡ ಸಮಿತಿಯ ಸಂಚಾಲಕರಾಗಿ ಶಕ್ತಿವೇಲು ಹಾಗೂ ನಸೀರ್ ಅಹಮದ್ ಎಕ್ಕಾವನ್ ಆಯ್ಕೆಗೊಂಡರು.

