# Tags
#ದೇಶ-ವಿದೇಶ

ಖಜಾಕಿಸ್ತಾನದ  ರಾಯಭಾರಿ ನುರ್ಲನ್  ಜಲ್ಗಾಸ್ಭಯೇವ್ ಸಿಎಂ ಭೇಟಿ

ಖಜಾಕಿಸ್ತಾನದ  ರಾಯಭಾರಿ ನುರ್ಲನ್  ಜಲ್ಗಾಸ್ಭಯೇವ್ ಸಿಎಂ ಭೇಟಿ

ಬೆಂಗಳೂರು, ಆಗಸ್ಟ್ 25:  ಖಜಾಕಿಸ್ತಾನದ  ರಾಯಭಾರಿ ನುರ್ಲನ್  ಜಲ್ಗಾಸ್ಭಯೇವ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.

 ಏರೋಸ್ಪೇಸ್ ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರುವ  ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.

 ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ  ಖಜಾಕಿಸ್ತಾನದ ಐಟಿ ಸಚಿವರು ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸುತ್ತಿದ್ದಾರೆ.

ಕಾನ್ಸುಲ್ ಜನರಲ್ ಕಚೇರಿಯನ್ನು ತೆರೆಯಲು ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂದು ರಾಯಭಾರಿಗಳು ತಿಳಿಸಿದರು.

 ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ  ಎಲ್ಲಾ ಸಹಕಾರವನ್ನು ನೀಡುವುದಾಗಿ  ಮುಖ್ಯಮಂತ್ರಿಗಳು ಭರವಸೆ ನೀಡಿದರು.

Leave a comment

Your email address will not be published. Required fields are marked *