# Tags
#ಧಾರ್ಮಿಕ

ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಅವಿರೋಧ ಆಯ್ಕೆ (Jaya C Kotian Bellampalli President of DK Mogaveera Mahajana Sangha)

.. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027 ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಅವಿರೋಧ ಆಯ್ಕೆ

 (Uchila) ಉಚ್ಚಿಲ: ಸುಮಾರು 800 ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಸರ್ವೋಚ್ಛ ಸಂಸ್ಥೆಯಾದ ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿಯವರು 3ನೇ ಬಾರಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

 ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ|ಜಿ. ಶಂಕರ್‌ರವರ ಉಪಸ್ಥಿತಿಯಲ್ಲಿ ನಡೆದ ಸಂಘದ ಸಭೆಯಲ್ಲಿ, ಗುಂಡು ಬಿ. ಅಮೀನ್‌ರವರ ಹಂಗಾಮಿ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

 ದ.ಕ. ಮೊಗವೀರ ಮಹಾಜನ ಸಂಘ(ರಿ.) ಉಚ್ಚಿಲ ಇದರ 2024-2027ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ:

 ಅಧ್ಯಕ್ಷರು : ಶ್ರೀ ಜಯ ಸಿ, ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರು :  ಮೋಹನ್ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ : ಶ್ರೀ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ: ಶ್ರೀ ಸುಜಿತ್ ಸಾಲ್ಯಾನ್ ಮುಲ್ಕಿ ಕೋಶಾಧಿಕಾರಿ: ಶ್ರೀ ರತ್ನಾಕರ್ ಸಾಲ್ಯಾನ್ ಮಲ್ಪೆ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ಶ್ರೀ ಗುಂಡು ಬಿ. ಅಮೀನ್ ಕಿದಿಯೂರು,  ವಾಸುದೇವ ಸಾಲ್ಯಾನ್ ಕಟಪಾಡಿ, ಶ್ರೀ ಗಿರಿಧರ್ ಎಸ್ ಸುವರ್ಣ ಮೂಳೂರು, ಶ್ರೀ ಕೇಶವ ಎಮ್. ಕೋಟ್ಯಾನ್ ಮಲ್ಪೆ, ಶ್ರೀ ಸತೀಶ್ ಅಮೀನ್ ಬಾರ್ಕೂರು, ಶ್ರೀ ಮಂಜುನಾಥ್ ಸುವರ್ಣ ಬಾರ್ಕೂರು, ಶ್ರೀ ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶ್ರೀ ಶಿವರಾಮ ಕೋಟ, ಶ್ರೀ  ಲೋಕೇಶ್ ಮೆಂಡನ್ ಉಪ್ಪೂರ್, ಶ್ರೀ ವಿನಯ ಕರ್ಕೇರ ಮಲ್ಪೆ, ಶ್ರೀ ಗಿರೀಶ್ ಕುಮಾರ್ ಪಿತ್ರೋಡಿ, ಶ್ರೀ ಜಯಂತ್ ಸಾಲ್ಯಾನ್ ಕನಕೋಡ, ಶ್ರೀ ಕಿರಣ್ ಕುಮಾರ್ ಪಿತ್ರೋಡಿ, ಶ್ರೀ ಸುಧಾಕರ ವಿ ಸುವರ್ಣ ಉಚ್ಚಿಲ, ಶ್ರೀ ನಾರಾಯಣ ಸಿ ಕರ್ಕೇರ ಪಡುಬಿದ್ರಿ,  ಶ್ರೀ ಸತೀಶ್ ಆರ್. ಕರ್ಕೇರ ಸುರತ್ಕಲ್,  ಶ್ರೀ ವಿಜಯ ಸುವರ್ಣ ಕುಳಾಯಿ, ಶ್ರೀ ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಶ್ರೀ ಪುರುಷೋತ್ತಮ ಕೋಟ್ಯಾನ್ ಬೋಳೂರು, ಶ್ರೀ ಯಶವಂತ್ ಪಿ. ಮೆಂಡನ್ ಬೋಳೂರುರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ|ಜಿ. ಶಂಕರ್‌ರವರು ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *