ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ
ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ
ಉಡುಪಿ\ಹೆಜಮಾಡಿ: ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಾಗಿದ್ದು, ವಿವಿಧ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಹೆಜಮಾಡಿ ಗ್ರಾಪಂ ಅಧ್ಯಕ್ಷರಾದ ರೇಶ್ಮಾ ಏ. ಮೆಂಡನ್, ಉಚ್ಚಿಲ ಹದಿನಾರುಪಟ್ನ ಮೊಗವೀರ ಸಭಾದ ಅಧ್ಯಕ್ಷರಾದ ಎಚ್. ರವಿ ಕುಂದರ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮುಖ್ಯ ಅತಿಥಿ ಜಯರಾಜ್ ಮೆಂಡನ್, ಸಂಘದ ಅಧ್ಯಕ್ಷ ವಿಜಯ ಕೆ. ಕೋಟ್ಯಾನ್, ಉಪಾಧ್ಯಕ್ಷ ಹೇಮನಾಥ ಪುತ್ರನ್, ಆಡಳಿತ ಮಂಡಳಿ ಸದಸ್ಯರಾದ ಎಸ್. ದಿವಾಕರ ಹೆಜಮಾಡಿ, ಕರುಣಾಕರ ಕರ್ಕೇರ, ವಿಕ್ರಮ್ ರಾಜ್, ಕೃಷ್ಣ ಎಸ್. ಕೋಟ್ಯಾನ್, ದಿವಾಕರ ಜೆ. ಕುಂದರ್, ಜನಾರ್ಧನ ಕೋಟ್ಯಾನ್, ದಯಾವತಿ ಕೋಟ್ಯಾನ್ ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕ ದಿವಾಕರ ಹೆಜಮಾಡಿ ಸ್ವಾಗತಿಸಿದರು. ಮಲ್ಲಿಕಾ ತಾರಾನಾಥ್ ವಂದಿಸಿದರು.