# Tags

ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶ ಭಾವನಾತ್ಮಕ ವಿಷಯಗಳಿಗೆ ಬದಲಾಗಿದೆ : ಪ್ರೊ. ರಾಕೇಶ್ ಬಟ್‌ಬೈಲ್ 

ಮಣಿಪಾಲ: ಸ್ವಾತಂತ್ರೋತ್ತರ ಭಾರತದ ರಾಜಕೀಯ  ಸನ್ನಿವೇಶದಲ್ಲಿ ಸಾರ್ವಜನಿಕ ಭಾಷಣದ  ಸ್ವರೂಪವು ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ವಿಮುಖವಾಗಿ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಬದಲಾಗಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬರಹಗಾರ – ವಿದ್ವಾಂಸ ಪ್ರೊ. ರಾಕೇಶ್ ಬಟ್‌ಬೈಲ್ ಹೇಳಿದರು.  ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ಭಾರತದಲ್ಲಿ ಸಾರ್ವಜನಿಕ ಭಾಷಣದ ಸ್ವರೂಪ 1947 ೨022’ ವಿಷಯದ ಕುರಿತು ಮಾತನಾಡುತ್ತಾ, ಪ್ರೊ. ಬಟ್‌ಬೈಲ್ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರ ಭಾಣಗಳನ್ನು ವಿಶ್ಲೇಷಿಸಿದರು ಮತ್ತು ಮೊದಲು ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಹೇಗೆ ಸಾರ್ವಜನಿಕ ಭಾಷಣದ ಪ್ರಮುಖ ಅಂಗವಾಗಿದ್ದವು ಎಂಬುದನ್ನು ಪ್ರದರ್ಶಿಸಿದರು.  ಸ್ವಾತಂತ್ರ್ಯದ ನಂತರ ಮತ್ತು ಸಾಮಾಜಿಕ ಭಾಷಣದ  ಸ್ವರೂಪವು, ವಿಶೇಷವಾಗಿ 1990 ರ ನಂತರ ಹೇಗೆ ಹೆಚ್ಚು ಭಾವನಾತ್ಮಕ ವಿಚಾರಗಳಿಗೆ ತಿರುಗಿತು ಎಂದು ವಿಶ್ಲೇಷಿಸಿದರು.  ರಾಜಕೀಯ ನಾಯಕರ ಮಹತ್ವದ ಭಾಷಣಗಳ ಕುರಿತ ಪುಸ್ತಕ ವನ್ನು ಇತ್ತೀಚೆಗೆ ಸಂಪಾದಿಸಿರುವ ಪ್ರೊ. ಬಟ್‌ಬೈಲ್, ಅನೇಕ ಬಾರಿ ನಾಯಕರು ರಾಜಕೀಯ ಲಾಭಕ್ಕಾಗಿ ಜನರ ಆತಂಕಗಳನ್ನು ಬಳಸಿಕೊಳ್ಳುವುದು ದುರದೃಷ್ಟಕರ ಎಂದು ಹೇಳಿದರು.          ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರೊ. ಫಣಿರಾಜ್, ಡಾ.ರೇಸ್ಮಿ ಭಾಸ್ಕರನ್, ಋತುರಾಜ್ ಹಾಗೂ ಹಲವು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.