# Tags

ಎಲ್ಲೂರಿನ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ

ಎಲ್ಲೂರಿನ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ ಸ್ವಂತ ಕೃಷಿ ಭೂಮಿಯನ್ನು ಹೊಂದಿಲ್ಲದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ ಹಡೀಲು ಗದ್ದೆಯನ್ನು ಎರವಲು ಪಡೆದು ಭತ್ತದ ಬೇಸಾಯವನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಯುವಕನ ಕೃಷಿ ಕಾಯಕ ನಿಜಕ್ಕೂ ಮಾದರಿಯಾಗಿದೆ. ಈ ಬಾರಿ ಸುಮಾರು ೪ ಎಕರೆಗೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. […]

ಆನಂದ್ ಸಿ ಕುಂದರ್ ಕನಸಿನ ಕೃಷಿ ಕಾಯಕದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮುದಾಯ

ಗೀತಾನಂದ ಫೌಂಡೇಶನ್‌ನಿಂದ  ಸಂಭ್ರಮದ ಸಾಗುವಳಿ ಎಂಬ ವಿನೂತ ಕಾರ್ಯಕ್ರಮ ಆಯೋಜನೆ ಕೋಟ: ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕನಸಿನ ಯೋಜನೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ನಿರ್ವಹಿಸುವ ಸಂಭ್ರಮದ ಸಾಗುವಳಿ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಹೊಸ ಆಯಾಮ ತುಂಬಿತು. ಮಂಗಳವಾರ ಕೋಟತಟ್ಟು ಪಡುಕರೆ ಪರಿಸರದ ಕೃಷಿ ಭೂಮಿಯಲ್ಲಿ ಉಡುಪಿ ಕೃಷಿ ಇಲಾಖೆಯ ಸಂಯೋಜನೆಯೊಂದಿಗೆ   ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ನಾಟಿಗೈಯುವ ಹೊಸ ತಲೆಮಾರಿಗೆ ಪರಿಚಯಿಸಿತು.  ಉಡುಪಿ ಜಿಲ್ಲಾ ಕೃಷಿ […]