ಎಲ್ಲೂರಿನ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ
ಎಲ್ಲೂರಿನ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ ಸ್ವಂತ ಕೃಷಿ ಭೂಮಿಯನ್ನು ಹೊಂದಿಲ್ಲದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ ಹಡೀಲು ಗದ್ದೆಯನ್ನು ಎರವಲು ಪಡೆದು ಭತ್ತದ ಬೇಸಾಯವನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಯುವಕನ ಕೃಷಿ ಕಾಯಕ ನಿಜಕ್ಕೂ ಮಾದರಿಯಾಗಿದೆ. ಈ ಬಾರಿ ಸುಮಾರು ೪ ಎಕರೆಗೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. […]