# Tags
#ಅಪರಾಧ

ಬಂಟ್ವಾಳ : ಕಳ್ಳರು ಮನೆಗೆ  ನುಗ್ಗಿ ನಗ, ನಗದು ಕಳವು

ಮನೆಗೆ ಕಳ್ಳರು ನಗ್ಗಿ ಲಕ್ಷಾಂತರ ರೂ.ಮೌಲ್ಯದ ನಗ-ನಗದು ದೋಚಿ‌ ಪರಾರಿ‌ಬಂಟ್ವಾಳ: ಯಾರು ಇಲ್ಲದ ವೇಳೆ ಮನೆಯೊಂದರ ಮುಂಬಾಗಿಲಿನ ಚಿಲಕವನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವುಗೈದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.
ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮನೆಯಲ್ಲಿ ಈ‌ಕಳವು ಕೃತ್ಯ ನಡೆದಿದ್ದು, ಸುಮಾರು 3.54 ಲ. ರೂ ಬೆಲೆ ಬಾಳುವ ಚಿನ್ನ ಹಾಗೂ ನಗದು ಕಳವುಗೈಯಲಾಗಿದೆ.
‌ಕ್ಯಾಟರಿಂಗ್ ಕೆಲಸ ಮಾಡುತ್ತಿರುವ
ಮಹಮ್ಮದ್ ಇಕ್ಬಾಲ್ ಅವರು ಪತ್ನಿ ಸಮೇತ ಸೆ.8 ರಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದು, ಸೆ. 12 ರಂದು ವಾಪಸು ಮನೆಗೆ ಬಂದಾಗ ಮುಂಬಾಗಿಲಿನ ಚಿಲಕ ಮುರಿದು ಹಾಕಿದ್ದು ಬಾಗಿಲು ತೆರದ ಸ್ಥಿತಿಯಲ್ಲಿತ್ತು.ಅನುಮಾನಗೊಂಡು ಒಳಗಡೆ ನೋಡಿದಾಗ ಕೋಣೆಯ ಬಾಗಿಲು ತೆರದು ಅಲ್ಲಿದ್ಧ ಗೋಡ್ರೇಜ್ ಬೀಗವನ್ನು ಒಡೆದು ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಬೆಳಕಿಗೆ ಬಂದಿದೆ.
ಕಪಾಟಿನಲ್ಲಿರಿಸಲಾಗಿದ್ದ 1.70 ಲ.ರೂ. ನಗದು, 36 ಗ್ರಾಂ ತೂಕದ 1.80 ಲ.ರೂ.ಮೌಲ್ಯದ ಚಿನ್ನಾಭರಣ ಹಾಗೂ ಕಪಾಟಿನ ಮೇಲೆ ಇದ್ದರ ವಿವೋ ಮೊಬೈಲ್ ಪೋನ್ ಕಳವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿದ್ದು ಪರಿಶೀಲನೆ ನಡೆಸಿದೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

Leave a comment

Your email address will not be published. Required fields are marked *

Emedia Advt1