# Tags
#ಮನೋರಂಜನೆ #ವಿಡಿಯೋ

ಕಾಪು : ರಂಗ ತರಂಗ ತಂಡದ 18ನೇ ನಾಟಕ  “ಕುಟ್ಯಣ್ಣನ ಕುಟುಂಬ” ಕ್ಕೆ ಮುಹೂರ್ತ (Kaup : 18th Drama “Kutyanna na KutuMba” by Ranga Taranga Team)

ಕಾಪು : ರಂಗ ತರಂಗ ತಂಡದ 18ನೇ ನಾಟಕ  “ಕುಟ್ಯಣ್ಣನ ಕುಟುಂಬ” ಕ್ಕೆ  ಮುಹೂರ್ತ

(Kaup) ಕಾಪು: ಸಮಾಜ ರತ್ನ ದಿ. ಲೀಲಾಧರ ಶೆಟ್ಟಿ   ಸಾರಥ್ಯದ  ಕಾಪುವಿನ ಖ್ಯಾತ ನಾಟಕ ತಂಡ ರಂಗ ತರಂಗದಿಂದ ನೂತನ 18ನೇ ನಾಟಕ ಕುಟ್ಯಣ್ಣನ ಕುಟುಂಬ  ಇದರ ಶುಭ ಮುಹೂರ್ತ ಕಾಪು  ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಪು ಶಾಕ ಗುರ್ಮೆ ಸುರೇಶ್ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಮತ್ತು  ಉಡುಪಿ ಜಿಲ್ಲೆಗಳಲ್ಲಿ ಅನೇಕ ನಾಟಕ ತಂಡಗಳು ನಾಟಕ ಪ್ರದರ್ಶನ ಮೂಲಕ  ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಬರುತ್ತಿದ್ದು, ಅದರಲ್ಲಿ ಸಮಾಜ ರತ್ನ ದಿ. ಲೀಲಾಧರ ಶೆಟ್ಟಿ ಸಾರಥ್ಯದ  ರಂಗ ತರಂಗ ನಾಟಕ ತಂಡ ಒಂದಾಗಿದೆ. ನೂತನ ನಾಟಕ ಕುಟ್ಯಣ್ಣನ ಕುಟುಂಬ ಯಶ ಕಾಣಲಿ ಎಂದು ಹಾರೈಸಿದರು.

ಕಾಪು ಶ್ರೀ ಜನಾರ್ಧನ ದೇವಳದ ಪ್ರಧಾನ ಅರ್ಚಕರಾದ  ಜನಾರ್ದನ ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಾಟಕದ ಕೃತಿ ಬಿಡುಗಡೆಗೊಳಿಸಲಾಯಿತು.

  ಕಥೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ನಿರ್ದೇಶನ ಪ್ರಸನ್ನ ಶೆಟ್ಟಿ ಬೈಲೂರು ಮತ್ತು ಶರತ್ ಉಚ್ಚಿಲ ಸಂಗೀತ ನಿರ್ದೇಶನದಲ್ಲಿ ನಾಟಕ ʼಕುಟ್ಯಣ್ಣನ ಕುಟುಂಬʼ ಮೂಡಿ ಬರಲಿದೆ.

   ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಜೆಡಿಎಸ್  ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ರವಿರಾಜ್ ಶೆಟ್ಟಿ, ನಾಟಕ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2