# Tags
#ಅಪಘಾತ

(Breaking news) ಕಾರ್ಕಳ : ಈಚರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ, ಮೂವರು ಮಕ್ಕಳು ಸೇರಿ ನಾಲ್ವರು ಸಾವು, ಒಬ್ಬರ ಸ್ಥಿತಿ ಗಂಭೀರ (Karkala accident between Eicher Lorry and Byke, Including three childrens died, one in critical condition)

ಕಾರ್ಕಳ : ಈಚರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ, ಮೂವರು ಮಕ್ಕಳು ಸೇರಿ ನಾಲ್ವರು ಸಾವು, ಒಬ್ಬರ ಸ್ಥಿತಿ ಗಂಭೀರ

(Karkala) ಕಾರ್ಕಳ : ಈಚರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಮಹಿಳೆ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದು, ಓರ್ವ ತೀವ್ರ ತರಹ ಗಾಯಗೊಂಡ ಘಟನೆ ಕಾರ್ಕಳದ ತಾಲೂಕಿನ ಹೊಸ್ಮಾರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಸೋಮವಾರ ಸಂಜೆ ಘಟಿಸಿದೆ.

  ಬೈಕ್ ನಲ್ಲಿ ಒಂದೇ ಕುಟುಂಬದ  ಐದು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಮೂವರು ಮಕ್ಕಳು ಸೇರಿದಂತೆ ತಂದೆ ಮೃತಪಟ್ಟಿದ್ದು, ಪತ್ನಿ ಸ್ಥಿತಿ ಗಂಭೀರವಾಗಿದ್ದು ದಾಖಲಿಸಲಾಗಿದೆ.

  ಬೈಕು ವೇಣೂರಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದು, ಕಾರ್ಕಳ ಬಜಗೋಳಿ ಕಡೆಯಿಂದ ಬರುತ್ತಿದ್ದ ಈಚರ್ ಲಾರಿ ಪಾಜೆಗುಡ್ಡೆ ತಿರುವಿನಲ್ಲಿ ಓವರ್ಟೇಕ್ ಮಾಡುವ ಭರದಲ್ಲಿ ಬೈಕೆಗೆ ಡಿಕ್ಕಿ ಹೊಡೆದಿದೆ

ಮೃತರನ್ನು ಬೆಳ್ತಂಗಡಿ ತಾಲೂಕಿನ ವೇಣೂರು  ಗಾಂಧಿನಗರ ನಿವಾಸಿ ಸುರೇಶ್ ಆಚಾರ್ಯ(36), ಮಕ್ಕಳಾದ ಸಮೀಕ್ಷಾ (7), ಸುಷ್ಮಿತಾ(5), ಸುಶಾಂತ್(2) ಗುರುತಿಸಲಾಗಿದ್ದು ಗಾಯಗೊಂಡ  ಸುರೇಶರವರ   ಆಚಾರ್ಯ ಪತ್ನಿ ಮೀನಾಕ್ಷಿ ಆಚಾರ್ಯ(32) ಅವರ ಸ್ಥಿತಿ ಗಂಭೀರವಾಗಿದೆ.

 ಆರೋಪಿ ಇಚರ್‌ ಚಾಲಕ ಹೇಮಂತ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

೦೦೦೦೦೦

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2