ನಮ್ಮ ಕನಸು ‘ಭಾರತ’ ಅವರದು ‘ಹಿಂದಿಯಾ” : ಹಿಂದಿ ಹೇರಿಕೆ ವಿರುದ್ಧ ಕಮಲ್ ಆಕ್ರೋಶ (Our dream is ‘Bharat’, theirs is ‘Hindiya’: Kamal’s outburst against Hindi imposition)

ನಮ್ಮ ಕನಸು ‘ಭಾರತ’ ಅವರದು ‘ಹಿಂದಿಯಾ” : ಹಿಂದಿ ಹೇರಿಕೆ ವಿರುದ್ಧ ಕಮಲ್ ಆಕ್ರೋಶ
(Thamilnadu) ತಮಿಳುನಾಡು: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ನಡುವಿನ ‘ಹಿಂದಿ ಹೇರಿಕೆ’, ಕ್ಷೇತ್ರ ಪುನರ್ ವಿಂಗಡಣೆ ಜಟಾಪಟಿಗೆ ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹಿಂದಿಯೇತರ ರಾಜ್ಯಗಳಿಗೆ ಭಾಷೆ ಸ್ವೀಕರಿಸುವಂತೆ ಒತ್ತಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರವು ಭಾರತವನ್ನು ಹಿಂದಿಯಾವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಕಮಲ್ ಆರೋಪಿಸಿದ್ದಾರೆ.
ಕೇಂದ್ರವು ಎಲ್ಲ ರಾಜ್ಯಗಳನ್ನು ಹಿಂದಿ ಮಾತನಾಡುವಂತೆ ಮಾಡಲು, ಬಹುಮತದೊಂದಿಗೆ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ನಮ್ಮ ಕನಸು ಭಾರತ. ಅವರದು ‘ಹಿಂದಿಯಾ” ಎಂದ ಕಮಲ್ ಹಾಸನ್, ತಮಿಳು ಪಕ್ಷಗಳ ಸಭೆಯಲ್ಲಿ ಹೇಳಿದರು. ನಂತರ ಹಿಂದಿ ಹೇರಿಕೆ ಮತ್ತು ಗಡಿನಿರ್ಣಯದ ಕುರಿತು ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಲಾಯಿತು.
ದಕ್ಷಿಣ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ ಎಂಬ ಕಳವಳಗಳ ಬಗ್ಗೆ ಕಮಲ ಹಾಸನ್ ಮತ್ತು ಅನೇಕ ತಮಿಳು ರಾಜಕಾರಣಿಗಳು ಧ್ವನಿ ಎತ್ತಿದ್ದಾರೆ. 1960ರ ದಶಕದಲ್ಲಿ ಘರ್ಷಣೆಗೆ ಕಾರಣವಾದ ದೀರ್ಘಕಾಲೀನ ವಿವಾದವು ಕಳೆದ ತಿಂಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಾತಿನ ನಂತರ ಮತ್ತೆ ಭುಗಿಲೆದ್ದಿತು.
ಕೇಂದ್ರವು ತನ್ನ ತ್ರಿಭಾಷಾ ನೀತಿಯನ್ನು ಜಾರಿಗೆ ತರದಿದ್ದರೆ, ಹಣವನ್ನು ತಡೆಹಿಡಿಯುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದರು.