ಮಾ.11ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುವ ಮುನ್ಸೂಚನೆ (Pre-monsoon rains expected in the state from March 11)

ಮಾ.11ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುವ ಮುನ್ಸೂಚನೆ
(Bengaluru) ಬೆಂಗಳೂರು: ಮಾ.11 ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬಿಸಿಲ ಬೇಗೆಯಿಂದ ಕಂಗೆಟ್ಟಿದ ರಾಜ್ಯದ ಜನತೆಗೆ ಗುಡ್ನ್ಯೂಸ್ ಸಿಕ್ಕಿದೆ.
ಕಳೆದೊಂದು ತಿಂಗಳಿನಿಂದ ನಾಡಿನ ಜನರು ಬಿಸಿಲ ಹೊಡೆತಕ್ಕೆ ಕಂಗಾಲಾಗಿದ್ದರು. ತಾಪಮಾನ ಏರಿಕೆ ಹಿನ್ನೆಲೆ ಮಳೆ ಮಾರುತಗಳು ಸಕ್ರಿಯವಾಗಿದ್ದು, ಮಾ.11ರಿಂದ 14ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.
ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಮಂಗಳೂರು: 34-26, ಶಿವಮೊಗ್ಗ: 36-22, ಬೆಳಗಾವಿ: 35-23, ಮೈಸೂರು: 33-22, ಮಂಡ್ಯ: 34-22, ಮಡಿಕೇರಿ: 34-20, ರಾಮನಗರ: 32-22, ಹಾಸನ: 33-19, ಚಾಮರಾಜನಗರ: 33-22, ಚಿಕ್ಕಬಳ್ಳಾಪುರ: 31-20, ಕೋಲಾರ: 31-21, ತುಮಕೂರು: 33-21, ಉಡುಪಿ: 33-26, ಕಾರವಾರ: 37-26, ಚಿಕ್ಕಮಗಳೂರು: 32-18, ದಾವಣಗೆರೆ: 36-22, ಹುಬ್ಬಳ್ಳಿ: 36-22, ಚಿತ್ರದುರ್ಗ: 33-21, ಹಾವೇರಿ: 37-22, ಬಳ್ಳಾರಿ: 36-22, ಗದಗ: 35-22, ಕೊಪ್ಪಳ: 36-22, ರಾಯಚೂರು: 37-23, ಯಾದಗಿರಿ: 37-22, ವಿಜಯಪುರ: 36-23, ಬೀದರ್: 36-22, ಕಲಬುರಗಿ: 38-22, ಬಾಗಲಕೋಟೆ: 36-23 ತಾಪಮಾನ ಇದೆ.